ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಕರ್ನಾಟಕದ ತಜ್ಞರ ಕೊಡುಗೆ ಅಪಾರ. ಚುನಾವಣೆ ವೇಳೆ ದುರುದ್ದೇಶದಿಂದ ಕೂಡಿದ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣವು ದುರುಪಯೋಗ ಆದಲ್ಲಿ, ಚುನಾವಣಾ ಆಯೋಗದ ಗಮನ ಸೆಳೆಯುವುದರ ಜೊತೆಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಈ ಮಾಧ್ಯಮ ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಕೋರಿದ್ದಾರೆ.