ಶಿವಶ್ಚಂದ್ರ ಅವರ ವಿವಾಹ ಬೆಂಗಳೂರಿನ ಚಂದ್ರಶೇಖರ್, ಶೈಲಜಾ ದಂಪತಿಯ ಪುತ್ರಿ ಕಾವ್ಯ ಅವರೊಂದಿಗೆ ನಿಶ್ಚಯವಾಗಿತ್ತು.ಮಗನ ಮದುವೆಯನ್ನು ಸಂಭ್ರಮದಿಂದ ಮಾಡಬೇಕು. ಬಂಧು ಬಳಗ, ಸಂಬಂಧಿಕರನ್ನೆಲ್ಲಾ ಕರೆದು ಆತಿಥ್ಯ ನೀಡಬೇಕು ಎಂದು ತಂದೆ, ತಾಯಿ ಕನಸು ಕಂಡಿದ್ದರು. ಆದರೆಕೊರೊನಾ ತಡೆಗೆ ವಿಧಿಸಿದ್ದ ಲಾಕ್ಡೌನ್ ಅದನ್ನು ಹೊಸಕಿ ಹಾಕಿತ್ತು. ನಿಶ್ಚಯವಾದ ಮದುವೆ ನಿಗದಿತ ಮುಹೂರ್ತದಲ್ಲಿ ನಡೆಯಬೇಕು ಎಂದು ಪೋಷಕರು ತಮಗೆ ಹೋಗಲಾಗದಿದ್ದರೂ ದೂರ
ದಿಂದಲೇ ಪುತ್ರನ ಮದುವೆ ಕಣ್ತುಂಬಿಕೊಂಡರು.ವಧುವಿನ ಮನೆಯಲ್ಲೇ ವಿವಾಹ ಸರಳವಾಗಿ ನಡೆಯಿತು.