ಮೈಸೂರು: ‘ಲೋಕಸಭಾ ಚುನಾವಣೆ ಸೀಟು ಹಂಚಿಕೆ ಸಂಬಂಧ ಕಾಂಗ್ರೆಸ್ ನಾಯಕರು ನಮ್ಮ ಜತೆ ಚರ್ಚಿಸಿಲ್ಲ. ಜೆಡಿಎಸ್ಗೆ ಇಂತಿಷ್ಟು ಸೀಟು ಬಿಟ್ಟುಕೊಡಬೇಕು ಎಂದು ಅವರು ಕೈಗೊಂಡ ತೀರ್ಮಾನದ ಬಗ್ಗೆ ನಾನರಿಯೆ. ಏಳೋ, ಐದೋ, ಮೂರೋ... ಎಷ್ಟು ಬಿಟ್ಟುಕೊಡುತ್ತಾರೋ ಗೊತ್ತಿಲ್ಲ. ವಿ ಆರ್ ನಾಟ್ ಬೆಗ್ಗರ್ಸ್ (ನಾವು ಭಿಕ್ಷುಕರಲ್ಲ)’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಹೇಳಿದರು.