ಆದರೆ, ಈ ಹಿಂದಿನ ಎರಡು ಚುನಾವಣೆಗಳಲ್ಲಿ ‘ಕೊನೆ ಚುನಾವಣೆ’ ಎಂದೇ ಗೌಡರು ಮತಯಾಚಿಸಿ ಗೆದ್ದಿದ್ದನ್ನು ಜನ ಮರೆತಿಲ್ಲ. ಹೀಗಾಗಿ ಕೊನೆ ಕ್ಷಣದ ಬದಲಾವಣೆ ಎಂಬಂತೆ ಹಾಸನದಿಂದ ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ. ಕಳೆದ ಚುನಾವಣೆಯಲ್ಲಿ ಗೌಡರಿಗೆ ಪೈಪೋಟಿ ನೀಡಿದ್ದ ಎ.ಮಂಜು ಅವರನ್ನು ಸೆಳೆದು ಬಿಜೆಪಿ ಅಭ್ಯರ್ಥಿಯಾಗಿಸುವ ಯೋಚನೆಯೂ ಆ ಪಕ್ಷದಲ್ಲಿ ನಡೆದಿದೆ.