‘ನಾನು ಸ್ಪರ್ಧಿಸುವ ಮುನ್ನ ಎಚ್.ಡಿ. ಕುಮಾರಸ್ವಾಮಿ ₹ 4 ಕೋಟಿ ‘ಪಾರ್ಟಿ ಫಂಡ್’ ಕೊಡುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಶಂಕರ ಮಾಡಲಗಿ ನನ್ನನ್ನು ಕರೆದೊಯ್ದು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಸಿದ್ದರು. ಅವರು ₹ 1 ಕೋಟಿ ಕಳುಹಿಸಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಆದರೆ, ಮಾಡಲಗಿ ನನಗೆ ₹ 40 ಲಕ್ಷ ಮಾತ್ರ ತಲುಪಿಸಿದ್ದಾರೆ. ಇಂತಹ ಮೋಸಗಾರನನ್ನು ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಇಟ್ಟಕೊಂಡರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ತುಂಬಲಾರದ ಹಾನಿಯಾಗುತ್ತದೆ. ಅವರನ್ನು ದೂರವಿಡಬೇಕು’ ಎಂದು ಕೋರಿದ್ದಾರೆ.