ಪುಣೆಯಲ್ಲಿ ಎಂಜಿನಿಯರ್ ಆಗಿದ್ದ ರಾಜು ಅವರು ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಬಂದಿದ್ದರು. ವಾರದ ನಂತರ ಅವರ ಕಣ್ಣುಗಳು ಹಳದಿ ಆಗಿದ್ದವು. ಜೊತೆಗೆ ಕೆಮ್ಮು, ಜ್ವರ ಕಾಣಿಸಿಕೊಂಡಿದ್ದವು. ಪುಣೆಯಿಂದ ಬಂದಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದೆ ಕೋವಿಡ್ –19 ತಪಾಸಣೆಗಾಗಿ ಕಿಮ್ಸ್ಗೆ ಹೋಗುವಂತೆ ಸೂಚಿಸಿದರು.