ಸಂಪ್ರದಾಯ ಹೇಗೆ ಬಂತು?:ಪ್ರಾಧ್ಯಾಪಕ ಚಿತ್ತಯ್ಯ ಪೂಜಾರ್ ಮಾತನಾಡಿ, ‘ಹಿಂದೆ ದೇವರ ಉತ್ಸವ, ಮೆರವಣಿಗೆ ನಡೆಸುವಾಗದಲಿತರು ಪಂಜು ಹಿಡಿದು ಉತ್ಸವದ ಮುಂದೆ ಬರುತ್ತಿದ್ದರು. ಆಗಿನ ಕಾಲದಲ್ಲಿ ಗುಡಿಸಲುಗಳು ಹೆಚ್ಚಿದ್ದರಿಂದ ಪಂಜಿನಿಂದ ಗುಡಿಸಲಿಗೆ ಅನಾಹುತ ಸಂಭವಿಸಬಹುದು ಎಂಬ ಕಾರಣಕ್ಕೆ ಪಂಜು ಹಿಡಿದವರು ಹಟ್ಟಿಯ ಹೊರಗೆ ನಿಲ್ಲುತ್ತಿದ್ದರು. ಅದು ಸಂಪ್ರದಾಯವಾಗಿ ಮುಂದುವರೆದಿದೆ’ ಎಂದರು.