ಸುಮಾರು 50 ಲಕ್ಷ ರೈತರಿಗೆ ಇದರ ಪ್ರಯೋಜನ ಸಿಗುತ್ತದೆ. ರಾಜ್ಯದ ಹಣಕಾಸು ಸ್ಥಿತಿ ಅಷ್ಟಾಗಿ ಉತ್ತಮವಿಲ್ಲದೇ ಇದ್ದರೂ ರೈತರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ. ಕೇಂದ್ರ ಸರ್ಕಾರ ಪ್ರತಿಯೊಬ್ಬ ರೈತನಿಗೆ ಎರಡು ಕಂತುಗಳಲ್ಲಿ ತಲಾ ₹3,000 ರಂತೆ ಒಟ್ಟು ₹6,000 ಮತ್ತು ರಾಜ್ಯ ಸರ್ಕಾರ ₹2,000 ರಂತೆ ಎರಡು ಕಂತುಗಳಲ್ಲಿ ₹4,000 ಪಾವತಿಸಲಾಗುವುದು. ಪ್ರತಿ ರೈತನಿಗೂ ವರ್ಷಕ್ಕೆ ₹10,000 ಸಿಗುತ್ತದೆ ಎಂದರು.