ರೈತ ರಾಮಚಂದ್ರ ಮಾತನಾಡಿ, ಮೊದಲು ಮಳೆ ಚೆನ್ನಾಗಿ ಬಂತು. ಮೆಕ್ಕೆ ಜೋಳ, ಶೇಂಗಾ, ರಾಗಿ ಬಿತ್ತನೆ ಮಾಡಿದೇವು. ಆದರೆ, ಬೆಳೆಗೆ ಸಕಾಲದಲ್ಲಿ ಮಳೆ ಬರಲಿಲ್ಲ. ಶೇಂಗಾ ಕಾಯಿ ಕಟ್ಟಿಲ್ಲ. ಮೆಕ್ಕೆ ಜೋಳ ತೆನೆ ಕಟ್ಟಲಿಲ್ಲ. ಆರು ಅಡಿ ಬೆಳೆಯಬೇಕಾಗಿದ್ದ ಮೆಕ್ಕೆ ಜೋಳ ಮೊಳಕಾಲಿನವರೆಗೂ ಬೆಳೆದಿಲ್ಲ. ಮೊಳ ಉದ್ದ ಇರಬೇಕಾಗಿದ್ದ ಮೆಕ್ಕೆ ಜೋಳದ ತೆನೆ ಚೋಟುದ್ದ ಇವೆ. ಕಾಳುಗಳೇ ಇಲ್ಲ ಎಂದು ಸಮಸ್ಯೆ ಬಿಚ್ಚಿಟ್ಟರು.