ಮಂತ್ರಾಲಯದ ಶ್ರೀಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಿಂದ ‘ಹರಿದಾಸ ಸಾಹಿತ್ಯ ಸಮ್ಮೇಳನ’ ಹಾಗೂ ಶ್ರೀಮದ್ ನ್ಯಾಯಸುಧಾ ಮಹಾಮಂಗಳ’ ಸಮಾರಂಭ ಏರ್ಪಡಿಸಲಾಗಿತ್ತು. ಈ ಸಮ್ಮೇಳನದಲ್ಲಿ ರಾಜ್ಯದ 20 ಬ್ರಾಹ್ಮಣ ಮಠಗಳಿಂದಲೂ ಯತಿಗಳು ಭಾಗಿಯಾಗಿದ್ದರು. ಹಿರಿಯ ಯತಿ ಪೇಜಾವರ ಶ್ರೀಗಳೊಂದಿಗೆ ಎಲ್ಲ ಸ್ವಾಮೀಜಿಗಳು ಮುಕ್ತವಾಗಿ ಚರ್ಚಿಸುವ ಅವಕಾಶ ನಿರ್ಮಾಣವಾಗಿತ್ತು. ನ್ಯಾಯಸುಧಾ ಮಹಾಮಂಗಳ ಗ್ರಂಥಕ್ಕೆ ಸಂಬಂಧಿಸಿದ ಸಂವಾದದಲ್ಲಿ ಪೇಜಾವರ ಶ್ರೀಗಳು ಉಪದೇಶ ನೀಡಿದ್ದರು.