ಉಡುಪಿ: ಅಮಾಯಕ ಯೋಧರ ಸಾವಿಗೆ ಕಾರಣರಾದ ಭಯೋತ್ಪಾದಕರನ್ನು ಕೇಂದ್ರ ಸರ್ಕಾರ ಮಟ್ಟ ಹಾಕಬೇಕು. ಉಗ್ರರಿಗೆ ಮರೆಯದಂತಹ ಪಾಠ ಕಲಿಸಬೇಕು. ಆದರೆ, ಉಗ್ರರ ವಿರುದ್ಧದ ಕಾರ್ಯಾಚರಣೆ ಯುದ್ಧಕ್ಕೆ ಕಾರಣವಾಗಬಾರದು. ಯುದ್ಧ ನಡೆದರೆ ಮತ್ತಷ್ಟು ಯೋಧರು ಬಲಿದಾನ ಮಾಡಬೇಕಾಗುತ್ತದೆ. ಹಾಗಾಗಿ, ಸರ್ಜಿಕಲ್ ಸ್ಟ್ರೈಕ್ ಮಾದರಿಯ ಸೀಮಿತ ದಾಳಿ ನಡೆಸಬೇಕು ಎಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟರು.