ಇಂಧನ ದರ ಏರಿಕೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ವಾಗ್ದಾಳಿ ನಡೆಸಿತ್ತು. ಇಂಧನ ದರ ಏರಿಕೆಯಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಹೇಳಿದ್ದ ಸರ್ಕಾರ ಶೇ 2ರಷ್ಟು ತೆರಿಗೆಯನ್ನೂ ಇಳಿಸಿತ್ತು. ಈಗ ಪುನಃ ತೆರಿಗೆ ಹೊರೆ ಹಾಕಿರುವುದನ್ನು ನೋಡಿದರೆ ಸಮ್ಮಿಶ್ರ ಸರ್ಕಾರ ಜನರ ಎದುರು ನಾಟಕವಾಡುತ್ತಿರುವುದು ಬಯಲಾದಂತಾಗಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ದೂರಿದರು.