‘ಕಮಿಷನರ್ ಹುದ್ದೆಗೆ ನಿಮ್ಮನ್ನು ನೇಮಕ ಮಾಡಿಸುತ್ತೇನೆ’ ಎಂದು ಹೇಳಿಕೊಂಡು ಅಲೋಕ್ ಕುಮಾರ್, ಭಾಸ್ಕರ್ ರಾವ್, ಅಮರ್ಕುಮಾರ್ ಪಾಂಡೆ ಮತ್ತು ಕಮಲ್ ಪಂತ್ ಅವರ ಜೊತೆಗೂ ಫರಾಜ್ ಮಾತನಾಡಿದ್ದಾನೆ. ಪಾಂಡೆ ಹಾಗೂ ಪಂತ್, ಈತನಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಇದಲ್ಲದೆ, ಮೂವರು ಯುವತಿಯರ ಜೊತೆ, ಫರಾಜ್ ಅಶ್ಲೀಲವಾಗಿ ಮಾತನಾಡಿದ್ದಾನೆ ಎಂದೂ ಮೂಲಗಳು ವಿವರಿಸಿವೆ.