ಕಳೆದ ನಾಲ್ಕು ತಿಂಗಳಿನಿಂದ ಈ ಭಾಗದಲ್ಲಿ ಹತ್ತಾರು ಕುರಿಗಳ ಕಳ್ಳತನ ಆಗಿದ್ದವು. ಅವುಗಳ ಹುಡುಕಾಟದಲ್ಲಿ ತೊಡಗಿದ್ದ ಕುರಿಗಳ ಮಾಲೀಕರು, ಶನಿವಾರ ಅಮೀನಗಡದ ಕುರಿ ಸಂತೆಗೆ ಬಂದಾಗ ಅಲ್ಲಿ ಕದ್ದ ಆಡಿನೊಂದಿಗೆ ಬಾಲಕ ಸಿಕ್ಕುಬಿದ್ದಿದ್ದಾನೆ. ಈ ವೇಳೆ ಆತನೊಂದಿಗೆ ಇದ್ದ ಮಾವ ಪರಾರಿಯಾಗಿದ್ದಾನೆ. ಬಾಲಕನನ್ನು ಗ್ರಾಮಕ್ಕೆ ಕರೆದೊಯ್ದು ಊರ ಮಧ್ಯೆ ಗುಡಿಯ ಎದುರಿನ ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ ಎಂದು ಹೇಳಲಾಗಿದೆ.