‘ಮಾಧ್ಯಮಗಳು ಥೆರಪಿ ಚಿಕಿತ್ಸೆ ವೈಫಲ್ಯ ಎಂದು ಬಿಂಬಿಸುತ್ತಿವೆ. ವೆಂಟಿಲೇಟರ್ನಲ್ಲಿದ್ದ ರೋಗಿಗೆ ಕೊನೆಯ ಅಸ್ತ್ರವಾಗಿ ಈ ಚಿಕಿತ್ಸೆ ನೀಡಲಾಗಿತ್ತು. ಅವರು ಚೇತರಿಸಿಕೊಂಡಿದ್ದರು. ಪ್ರಾಯೋಗಿಕವಾಗಿ ಪ್ಲಾಸ್ಮಾ ಚಿಕಿತ್ಸೆ ನಡೆಸಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಒಟ್ಟು ಪ್ರಕರಣಗಳ ಫಲಿತಾಂಶ ನೋಡಿ ಚಿಕಿತ್ಸೆಯನ್ನು ಅಳೆಯಬೇಕೇ ವಿನಾ ಒಂದು ಪ್ರಕರಣದಿಂದಲ್ಲ’ ಎಂದು ಹೇಳಿದರು.