ಬೆಂಗಳೂರು: ಪೊಲೀಸ್ ಪೇದೆಗಳ ಕಷ್ಟ ಪರಿಹಾರ ಭತ್ಯೆಯನ್ನು ₹1000ದಿಂದ ₹2,000ಕ್ಕೆ ಏರಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶವು ಜುಲೈ 1ರಿಂದ ಜಾರಿಗೆ ಬರಲಿದೆ.
ಅಲ್ಲದೆ, ಮೂಲ ತರಬೇತಿ ಪಡೆಯುತ್ತಿರುವ ಸಬ್ ಇನ್ಸ್ಪೆಕ್ಟರ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ಅಭ್ಯರ್ಥಿಗಳ ಕರಾರು ಪತ್ರದ ಮೊತ್ತ ಪಾವತಿಯನ್ನು ಷರತ್ತಿಗೊಳಪಟ್ಟು ವಿನಾಯ್ತಿ ನೀಡಲಾಗಿದೆ. ಈ ಸಂಬಂಧ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.