ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದಡಿವೈಎಸ್ಪಿ ಶಂಕರ್ ಮಾರಿಹಾಳ, ‘ನಾಲ್ವರನ್ನು ವಿಚಾರಣೆ ನಡೆಸಿರುವುದು ನಿಜ. ಆದರೆ, ಅವರು ಕಾಶ್ಮೀರದ ಕುಪ್ವಾರದವರು. ಮುಂಬೈನಲ್ಲಿ ಕೆಲವು ವರ್ಷಗಳಿಂದ ವಾಸವಿದ್ದರು. ಅಲ್ಲಿ ಮಳೆ ಹೆಚ್ಚಿದ್ದ ಕಾರಣ ನಗರಕ್ಕೆ ವಲಸೆ ಬಂದಿದ್ದರು. ಇಲ್ಲಿ ಕೆಲವು ಅಂಗಡಿ, ಮನೆಗಳಲ್ಲಿ ಚಂದಾ ವಸೂಲಿ ಮಾಡಿಕೊಂಡು, ಊಟ, ವಸತಿಗೃಹದ ವೆಚ್ಚ ಸರಿದೂಗಿಸಿಕೊಳ್ಳುತ್ತಿದ್ದರು. ಈ ಮುಂಚೆ ಹೈಲರ್ಟ್ ಘೋಷಿಸಿದ್ದರಿಂದ, ಜತೆಗೆ ಕಾಶ್ಮೀರದವರು ಎಂಬ ಕಾರಣದಿಂದ ವಿಚಾರಣೆ ನಡೆಸಿದೆವು’ ಎಂದು ಸ್ಪಷ್ಟಪಡಿಸಿದರು.