ರಮೇಶ್ ಜಾರಕಿಹೊಳಿ, ಎಚ್.ವಿಶ್ವನಾಥ್, ಬಿ.ಸಿ ಪಾಟೀಲ್,ಶಿವರಾಮ್ ಹೆಬ್ಬಾರ್, ಗೋಪಾಲಯ್ಯ, ನಾರಾಯಣಗೌಡ, ಮಹೇಶ್ ಕುಮಠಳ್ಳಿಅವರು ಸ್ಪೀಕರ್ ಕಚೇರಿಗೆ ತೆರಳಿದ್ದು, ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.
ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ವಿಧಾನಸೌಧದ ಸ್ಪೀಕರ್ ಕಚೇರಿ ಬಳಿ ಜನಜಂಗುಳಿ
ಶಾಸಕರು ಸ್ಪೀಕರ್ ಕಚೇರಿಗೆ ತೆರಳಿದಾಗಲೇ ರಮೇಶ್ ಕುಮಾರ್ ಅವರು ಕಚೇರಿಯಿಂದ ಹೊರಗೆ ತೆರಳಿದ್ದಾರೆ. ಬಹುತೇಕ ಸ್ಪೀಕರ್ ಕಚೇರಿಗೆ ಬಂದ ಕೂಡಲೇ ಈ ಎಂಟೂ ಶಾಸಕರೂ ರಾಜೀನಾಮೆ ನೀಡುವ ಸಂಭವವಿದೆ ಎಂದು ಹೇಳಲಾಗುತ್ತಿದೆ.