‘ಅಂಬರೀಶ್ ಅವರು ಒಬ್ಬ ನಟರಾಗಿ, ರಾಜಕಾರಣಿಯಾಗಿ ಈ ನಾಡಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಪತ್ನಿ ಚುನಾವಣಾ ಕಣದಲ್ಲಿ ಏಕಾಂಗಿಯಾಗಿ ಹೋರಾಡುತ್ತಿರುವುದು ಹೆಮ್ಮೆಯ ಸಂಗತಿ. ರಾಜಕೀಯ ಎಂದರೆ ಮಹಿಳೆಯರು ಸಾಮಾನ್ಯವಾಗಿ ದೂರ ಉಳಿಯುತ್ತಾರೆ. ಆದರೆ, ಸುಮಲತಾ ಅವರು ಧೈರ್ಯದಿಂದ ರಾಜಕೀಯ ಪ್ರವೇಶಿಸಿ, ಚುನಾವಣೆಗೆ ನಿಂತಿದ್ದಾರೆ. ಅವರು ಭಾರಿ ಬಹುಮತದೊಂದಿಗೆ ಗೆಲ್ಲಬೇಕೆಂದು ಹಾರೈಸಿ ವಿಶೇಷ ಪೂಜೆ ಮಾಡಿಸಿದ್ದೇವೆ’ ಎಂದು ಅಂಬರೀಶ್ ಅಭಿಮಾನಿ ಮಾದಿಗರ ವೀರೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.