ಲಾಭದಾಯಕ ಹುದ್ದೆ, ವರ್ಗಾವಣೆ ವಿಷಯವಾಗಿ ಐಪಿಎಸ್ ಅಧಿಕಾರಿಗಳ ನಡುವೆ ತೆರೆಮರೆಯಲ್ಲಿ ಶೀತಲ ಸಮರ ನಡೆಯುತ್ತಿದೆ. ರಾಷ್ಟ್ರಪತಿ ಪದಕಕ್ಕೆ ಸಿದ್ಧಪಡಿಸಿದ ಪೊಲೀಸರ ಹೆಸರಿನ ಬಗ್ಗೆ ತಗಾದೆ ತೆಗೆದಿದ್ದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು, ‘ಪದಕಕ್ಕೆ ತಮ್ಮ ಹೆಸರನ್ನು ಪರಿಗಣಿಸದೆ ಅನ್ಯಾಯ ಮಾಡಲಾಗಿದೆ’ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.