‘ಪಕ್ಷಿ ಸಂಕುಲ ಸಂರಕ್ಷಿಸಿ, ಪಕ್ಷಿ ಸಂಕುಲ ಸಂವರ್ಧಿಸಿ’ ಧ್ಯೇಯ ವಾಕ್ಯದೊಂದಿಗೆ ಬೇಸಿಗೆಯಲ್ಲಿ ಪಕ್ಷಿಗಳಿಗೆ ಅನ್ನ, ನೀರು ಉದ್ದೇಶ ಹೊಂದಿರುವ ದತ್ತ ಗಜಾನನ ಮಂಡಳದ ಕಾರ್ಯಕರ್ತರು ನಿತ್ಯವೂ ಅತ್ತಿ ಮರವೇರಿ ಪೆಟ್ಟಿಗೆಯಲ್ಲಿ ದವಸ ಧಾನ್ಯ ಮತ್ತು ಮಡಿಕೆಗಳಲ್ಲಿ ನೀರು ಹಾಕುತ್ತಾರೆ. ಕಳೆದ ಸುಮಾರು ಮೂರು ತಿಂಗಳುಗಳಿಂದ ಯುವಕರು ಈ ಸೇವಾ ಕಾರ್ಯದಲ್ಲಿ ತೊಡಗಿದ್ದು, ಮರದಲ್ಲಿ ನಿತ್ಯವೂ ಹತ್ತಾರು ಪ್ರಭೇದಗಳ ಪಕ್ಷಿಗಳು ಜಮಾವಣೆಗೊಂಡು ಆಹಾರ, ನೀರು ಸೇವಿಸುತ್ತಿದ್ದು, ಇಡೀ ಪರಿಸರದಲ್ಲಿ ಪಕ್ಷಿಗಳ ಕಲರವ ಕೇಳಿ ಬರುತ್ತಿದೆ.