ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿಗಳಾಗಿದ್ದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ ಪಕ್ಷದ ಹಿರಿಯರ ಪಡಸಾಲೆ ಹಾಗೂ ನೀತಿ ನಿರೂಪಕರ ಸ್ಥಾನದಲ್ಲಿ ಇದ್ದವರು. ಆದರೆಪ್ರಮಾಣ ವಚನ ಸ್ವೀಕಾರ ಸಮಯದಲ್ಲಿ ಮೊದಲಿಗೆ ಗೋವಿಂದ ಕಾರಜೋಳ, ನಂತರ ಡಾ.ಸಿ.ಎನ್.ಅಶ್ವಥನಾರಾಯಣ, ಲಕ್ಷ್ಮಣ ಸವದಿ ಹೆಸರು ಕರೆಯಲಾಯಿತು. ಕೆ.ಎಸ್.ಈಶ್ವರಪ್ಪ, ಆರ್.ಅಶೋಕ, ಜಗದೀಶ್ ಶೆಟ್ಟರ್ ನಂತರ ಪ್ರಮಾಣ ಸ್ವೀಕರಿಸಿದರು.