ಗೌರಿಬಿದನೂರು: ಪರಿತ್ಯಕ್ತಗೊಂಡು ಬೀದಿನಾಯಿಗಳ ದಾಳಿಗೆ ಬಲಿಯಾದ ನವಜಾತ ಶಿಶುವಿನ ಹೆತ್ತವರ ಜಾಡು ಹಿಡಿದು ಹೋದ ಅಧಿಕಾರಿಗಳು, ಪ್ರೀತಿಸಿ ವಿವಾಹವಾಗದೆ ದೂರವಾಗಿದ್ದ ಪ್ರೇಮಿಗಳಿಗೆ ವಿವಾಹ ಮಾಡಿಸಿ ಮತ್ತೆ ಒಂದು ಮಾಡಿದರು. ಗುರುವಾರ ಪಟ್ಟಣ ಹೊರವಲಯದ ಸಾಯಿಬಾಬಾ ದೇವಸ್ಥಾನದಲ್ಲಿ ನಡೆದ ಈ ವಿವಾಹಕ್ಕೆ ಅನೇಕರು ಸಾಕ್ಷಿಯಾದರು.