ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

"ಕೆಂಪೇಗೌಡರ ನಾಡಿನ ಸಮಗ್ರ ಅಭಿವೃದ್ಧಿ'

ಭರವಸೆ ಈಡೇರಿಸುವುದೇ ಮುಖ್ಯ ಗುರಿ l ಶಾಸಕರ ಕಚೇರಿ ಪೂಜೆ ಕಾರ್ಯಕ್ರಮದಲ್ಲಿ ಎ.ಮಂಜುನಾಥ ಆಶಯ
Last Updated 9 ಜೂನ್ 2018, 8:57 IST
ಅಕ್ಷರ ಗಾತ್ರ

ಮಾಗಡಿ: ‘ಕೆಂಪೇಗೌಡರ ನಾಡನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿ, ಬದಲಾವಣೆ ಮಾಡುವ ಉದ್ದೇಶದಿಂದ ಪ್ರತಿ ಶುಕ್ರವಾರ ಪುರಸಭಾ ಕಚೇರಿಯಲ್ಲಿ ಕುಳಿತು ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಶಾಸಕ ಎ.ಮಂಜುನಾಥ ಭರವಸೆ ನೀಡಿದರು.

ಪುರಸಭೆ ಕಚೇರಿಯ ಮಹಡಿಯ ಮೇಲಿನ ಶಾಸಕರ ಕೊಠಡಿಯಲ್ಲಿ ಶುಕ್ರವಾರ ಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ಶಾಸಕರ ಸ್ಥಾನ ಸಿಕ್ಕಿದ್ದು ಪುಣ್ಯದ ಕೆಲಸ. ಮತದಾರರು ನನ್ನ ಮೇಲೆ ದೊಡ್ಡ ಜವಾಬ್ದಾರಿ ಹೊರಿಸಿದ್ದಾರೆ. ಜನತೆಯ ಸೇವೆ ಮಾಡಿ ಜನರಿಗೆ ಒಳಿತನ್ನು ಮಾಡಲು ಶ್ರಮಿಸುತ್ತೇನೆ. ಚುನಾವಣೆಗೆ ಮುನ್ನ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವುದು ನನ್ನ ಮುಖ್ಯ ಗುರಿಯಾಗಿದೆ’ ಎಂದರು.

ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ಮಾತನಾಡಿ ಚುನಾವಣೆಗೆ ಮುನ್ನ ರಾಜ್ಯಕ್ಕೆ ಎಚ್‌.ಡಿ.ಕುಮಾರ ಸ್ವಾಮಿ, ಮಾಗಡಿಗೆ ಎ.ಮಂಜುನಾಥ ಎಂಬ ಧ್ಯೇಯವಾಕ್ಯದಂತೆ ಜನತೆ ಆಶೀರ್ವಾದ ಮಾಡಿದ್ದಾರೆ. ಅವರ ಋಣ ತೀರಿಸಲು ನಾವೆಲ್ಲರೂ ಪ್ರಾಮಾಣಿಕವಾಗಿ ಜನರ ನಡುವೆ ಇದ್ದು ದುಡಿಯುತ್ತೇವೆ. ನಿಮ್ಮೆಲ್ಲರ ಸಹಕಾರ ನಮಗೆ ಬೇಕಿದೆ ಎಂದರು. ಪುರಸಭೆ ಅಧ್ಯಕ್ಷ ಎಚ್‌.ಆರ್‌.ಮಂಜುನಾಥ ಮಾತನಾಡಿ, ಪುರಸಭೆಯ ಅಭಿವೃದ್ಧಿಗೆ ಶಾಸಕರೊಂದಿಗೆ ಕೈಜೋಡಿಸುವುದಾಗಿ ತಿಳಿಸಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ ಮಹಮದ್‌ ರಿಯಾಜ್‌, ಶಾಸಕರ ಪತ್ನಿ ಲಕ್ಷ್ಮೀಮಂಜುನಾಥ್‌, ಹಿರಿಯರಾದ ಎಚ್‌.ಎಂ.ಕೆಂಪೇಗೌಡ, ಬಿ.ಆರ್‌.ಗುಡ್ಡೇಗೌಡ, ಪಿ.ವಿ.ಸೀತಾರಾಮು, ಸರ್ದಾರ್‌ ಪಾಷಾ, ಜುಟ್ಟನ ಹಳ್ಳಿ ಮಾರೇಗೌಡ, ಪುರಸಭೆ ಸದಸ್ಯರಾದ ಎಂ.ಎನ್‌.ಮಂಜುನಾಥ, ಕೆ.ವಿ.ಬಾಲು, ಸುನಿತಾ ನಾಗರಾಜು, ಶಿವಕುಮಾರ್‌, ಜಯಲಕ್ಷ್ಮೀರೇವಣ್ಣ, ಮಹೇಶ್‌, ನಯಾಜ್‌ ಅಹಮದ್‌, ನರಸಿಂಹ ಮೂರ್ತಿ, ಜೆಡಿಎಸ್‌ ಮುಖಂಡರಾದ ಕಲ್ಕೆರೆ ಶಿವಣ್ಣ, ದೊಡ್ಡಯ್ಯ, ಅಶ್ವಥ್‌, ರೂಪೇಶ್‌ ಕುಮಾರ್‌, ನರಸೇಗೌಡ, ವಿಜಯಸಿಂಹ, ಹೊಂಬಾಳಮ್ಮನಪೇಟೆ ರಾಮು, ಅನಿಲ್‌ ಕುಮಾರ್‌, ದಂಡಿಗೆಪುರದ ಕುಮಾರ್‌, ಪುರಿ ಅಂಗಡಿಕೃಷ್ಣ, ಬಸವೇನಹಳ್ಳಿ ಚಿಕ್ಕಣ್ಣ, ಅನಿಲ್‌ ಕುಮಾರ್‌, ಗಣಪತಿ ಶಿಲ್ಪಿ ಹೇಮಂತ್‌ ಕುಮಾರ್‌ ಭಾಗವಹಿಸಿದ್ದರು.

ಮಹಮದ್‌ ಅಮ್ಜದ್‌ ಪಾಷಾ, ಮಹಮದ್‌ ಜಿಯಾ, ನವಾಬ್‌, ಹೊಸಹಳ್ಳಿ ಮುನಿರಾಜು, ರಂಗಣ್ಣ, ಹೊಸಮಸೀದಿ ಮೊಹಲ್ಲಾದ ರಹಮತ್‌ ಉಲ್ಲಾಖಾನ್‌, ಹನುಮಾಪುರದ ಚಿಕ್ಕಣ್ಣ, ಸಾತನೂರಿನ ಮಂಜುನಾಥ್‌, ಗಾಂಧಿ ನಗರದ ಆನಂದ್‌ ಸಿಂಗ್‌, ಸವಿತಾ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮುನಿಕೃಷ್ಣ, ತಾಲ್ಲೂಕು ಘಟಕದ ಚನ್ನಕೇಶವ, ಮುನಿಯಪ್ಪ, ಕುಂಬಾರ ಸಂಘದ ವೆಂಕಟೇಶಯ್ಯ, ತಾಲ್ಲೂಕು ಬಿ.ಎಸ್‌.ಪಿ ಅಧ್ಯಕ್ಷ ನಾಗಾರಾಜು ಇದ್ದರು.

ತಿರುವೆಂಗಳನಾಥ ರಂಗನಾಥ ಸ್ವಾಮಿ ದೇವಾಲಯದ ಅರ್ಚಕ ಶ್ರೀಶೈಲ ಭಟ್ ಪೂಜೆ ನೆರವೇರಿಸಿದರು. ಯುವಕರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಜನರ ನೂಕುನುಗ್ಗಲಿನಲ್ಲಿಯೇ ಸಭೆ ಮುಗಿಯಿತು.

ಪುರಸಭೆ ಮುಖ್ಯಾಧಿಕಾರಿ ಕೆ.ಯು, ಕೊಟ್ಟು ಕತ್ತಿರ ಮುತ್ತಪ್ಪ ಹಾಗೂ ಅಧಿಕಾರಿಗಳು ಶಾಸಕ ಎ.ಮಂಜುನಾಥ ಅವರನ್ನು ಸನ್ಮಾನಿಸಿದರು. ಪುರಸಭೆ ನೌಕರರನ್ನು ಶಾಸಕರು ಪರಿಚಯ ಮಾಡಿಕೊಂಡರು.

ಮಧ್ಯಾಹ್ನ 12 ಗಂಟೆಗೆ ಆರಂಭವಾಗಬೇಕಾಗಿದ್ದ ಪೂಜಾ ಕಾರ್ಯಕ್ರಮ ತಡವಾಗಿ 2 ಗಂಟೆಗೆ ಆರಂಭವಾಯಿತು. ಪೌರಸೇವಾ ನೌಕರರು ಪಟಾಕಿ ಸಿಡಿಸಿ ಹೂಗುಚ್ಛ ನೀಡಿ ಸ್ವಾಗತಿಸಿದರು.

ಕಂಬನಿ: ‘3 ತಿಂಗಳಿಂದಲೂ ಗುತ್ತಿಗೆದಾರ ನಮಗೆ ಸಂಬಳ ನೀಡಿಲ್ಲ. ಶಾಸಕರ ಬಳಿ ನಮ್ಮ ಸಮಸ್ಯೆ ಹೇಳಿಕೊಳ್ಳುವ ಆಸೆ ಇತ್ತು. ಅವರ ಬಳಿ ಸುಳಿಯಲು ಸಾಧ್ಯವಾಗದೆ ನುಕುನುಗ್ಗಲಿನಲ್ಲಿ ಹಿಂತಿರುಗಿದೆ’ ಎಂದು ಹೆಸರು ಹೇಳಲು ಇಚ್ಚಿಸದ ಗುತ್ತಿಗೆ ಪೌರಸೇವಾ ನೌಕರ ಮಹಿಳೆ ಕಂಬನಿ ಮಿಡಿದರು.

ಕಲುಷಿತ: ಪುರಸಭೆ ಕಚೇರಿಯಲ್ಲಿನ ಶೌಚಾಲಯದಲ್ಲಿ ನೀರು ಸೋರುತ್ತಿದೆ. ಸ್ವಚ್ಛತೆ ಮಾಡಿಲ್ಲ. ದುರ್ಗಂಧ ಬೀರುತ್ತಿದೆ. ಪಟ್ಟಣದಲ್ಲಿನ ಸ್ವಚ್ಛತೆ ಕಾಪಾಡುವ ಮಾತು ಕೇವಲ ಭಾಷಣಕ್ಕೆ ಸೀಮಿತವಾಗಿದೆ ಎಂದು ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಗಂಗಾಧರ್‌ ಆಕ್ರೋಶ ವ್ಯಕ್ತ ಪಡಿಸಿದರು.

ಪಟ್ಟಣದ ಚರಂಡಿಗಳಿಗೆ ಕ್ರಿಮಿನಾಶಕ ಚಿಮುಕಿಸಿದ ನಿದರ್ಶನ ಇಲ್ಲ. ಸೊಳ್ಳೆ ಮತ್ತು ಕ್ರಿಮಿಕೀಟಗಳ ಬಾಧೆ ಹೇಳ ತೀರದು. ಅಧ್ಯಕ್ಷರು, ಶಾಸಕರು, ಮಂತ್ರಿಗಳು , ಮುಖ್ಯಾಧಿಕಾರಿಗಳು ಬದಲಾಗುತ್ತಿದ್ದಾರೆ. ಪಟ್ಟಣದ ಸಮಸ್ಯೆಗಳು ಮಾತ್ರ ಹಾಗೇ ಉಳಿದಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಸರ್ವಾಂಗೀಣ ಪ್ರಗತಿಗೆ ಕ್ರಮ

ಪುರಸಭೆಯಲ್ಲಿನ ಅಧಿಕಾರಿಗಳ ಕೊರತೆ ತುಂಬಿಸಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಅವರಿಂದ ವಿಶೇಷ ಅನುದಾನ ತಂದು ಮಾಗಡಿ ಪಟ್ಟಣದ ಸರ್ವಾಂಗೀಣ ಬೆಳೆವಣಿಗೆಗೆ ಹೊಸ ಯೋಜನೆ ತಯಾರಿಸಿ ಅಭಿವೃದ್ದಿ ಪಡಿಸುವ ಕನಸಿದೆ ಎಂದು ಎ.ಮಂಜುನಾಥ ತಿಳಿಸಿದರು.

‘ಪಟ್ಟಣದ ಎಲ್ಲ ವಾರ್ಡುಗಳಲ್ಲಿ ಚುನಾವಣೆಯಲ್ಲಿ ನನಗೆ ಅಧಿಕ ಮತ ನೀಡಿದ್ದಾರೆ. ಅವರ ಋಣ ತೀರಿಸುವ ಜವಾಬ್ದಾರಿ ನನಗಿದೆ. ಪಕ್ಷಾತೀತವಾಗಿ ತಾಲ್ಲೂಕಿನ ಅಭಿವೃದ್ದಿಯ ಜೊತೆಯಲ್ಲಿ ಪಟ್ಟಣದ ಅಭಿವೃದ್ದಿ ಮಾಡಿಸುವೆ. ಯೋಜನಾ ಪ್ರಾಧಿಕಾರದ ನಿಧಿಯನ್ನು ಸಮಗ್ರವಾಗಿ ಬಳೆಕ ಮಾಡಿಕೊಳ್ಳಲು ಅಧಿಕಾರಿಗಳು, ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಕಾಲಮಿತಿಯೊಳಗೆ ಅಭಿವೃದ್ದಿ ಆರಂಭಿಸಿ, ಪೂರ್ಣಗೊಳಿಸುವ ಉದ್ದೇಶವಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT