ಕಾವೇರಿ ಆನ್ಲೈನ್ ಸೇವೆ ಕುರಿತ ಸಾಫ್ಟ್ವೇರ್ನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಹೀಗಾಗಿ ಆನ್ಲೈನ್ನಲ್ಲಿ ದಾಖಲೆಗಳನ್ನು ನೀಡಿದರೆ ತಪ್ಪುಗಳಾಗಬಹುದು. ಕಾನೂನು ತೊಡಕುಗಳು ಉಂಟಾಗಿ ದಾಖಲೆ ಪಡೆಯುವವರು ಮತ್ತು ಇಲಾಖೆ ಸಂಕಷ್ಟಕ್ಕೆ ಸಿಲುಕಬೇಕಾಗಬಹುದು. ಹೀಗಾಗಿ, ದಾಖಲೆಗಳನ್ನು ನೋಂದಣಾಧಿಕಾರಿಗಳೇ ಸಿದ್ಧಪಡಿಸಿ ನೀಡಬೇಕು ಎಂದು ಇಲಾಖೆ ಹೇಳಿದೆ.