ಹೋರಾಟಗಾರರ ವೇದಿಕೆ ಪ್ರಮುಖ ಎ. ರವೀಂದ್ರ ನಾಯ್ಕ ಮಾತನಾಡಿ, ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 5,621 ಅತಿಕ್ರಮಣಕಾರರ 3,159 ಹೆಕ್ಟೇರ್ ಪ್ರದೇಶ ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಸರ್ಕಾರಕ್ಕೆ ವರದಿ ನೀಡಿದೆ. ಆದರೆ ಈ ವರದಿ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಒಂದೊಮ್ಮೆ ವರದಿ ಕಳುಹಿಸಿದ್ದರೆ ಅದರ ಮಾಹಿತಿಯನ್ನು ತಕ್ಷಣ ಕೊಡಬೇಕು’ ಎಂದರು.