ದೇವದುರ್ಗದಿಂದ ಕೊಪ್ಪರ ಮಾರ್ಗದಲ್ಲಿರುವ ಯಾಟಗಲ್, ಹೇರೂರು ಮತ್ತು ಗೂಗಲ್ ಗ್ರಾಮಗಳ ವಿದ್ಯಾರ್ಥಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಮಧ್ಯೆ ಶಾಲಾ, ಕಾಲೇಜುಗಳ ಪ್ರಾಂಶುಪಾಲರು ಧರಣಿ ಸ್ಥಳಕ್ಕೆ ಬಂದು, ಧರಣಿನಿರತರನ್ನು ಕಾಲೇಜುಗಳಿಗೆ ಬರುವಂತೆ ಪ್ರತಿದಿನ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಕೆಲವರು ಭಯದಿಂದ ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಆದರೆ, ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಈವರೆಗೂ ಮಾಡುತ್ತಿಲ್ಲ.