‘ಗಾಂಧಿನಗರದ ಹೋಟೆಲೊಂದರಲ್ಲಿ ಜನಾರ್ದನ್ ಅವರನ್ನು ಭೇಟಿಯಾಗಿದ್ದ ಆರೋಪಿಸಂತೋಷ್, ಎರಡು ಹಂತದಲ್ಲಿ ₹ 20 ಲಕ್ಷ ಪಡೆದಿದ್ದ. ಕೆಲ ದಿನ ಬಿಟ್ಟು, ‘ಪಿಎಸ್ಐ ಕೆಲಸಕ್ಕೆ ₹ 50 ಲಕ್ಷ ಬೇಕು. ಉಳಿದ ಹಣವನ್ನು ತಂದುಕೊಡು’ ಎಂದು ಹೇಳಲಾರಂಭಿಸಿದ್ದ. ಅನುಮಾನಗೊಂಡ ಜನಾರ್ದನ್, ಹಣ ವಾಪಸ್ ನೀಡುವಂತೆ ಒತ್ತಾಯಿಸಲಾರಂಭಿಸಿದ್ದರು. ಆರೋಪಿ ಹಣ ಕೊಟ್ಟಿರಲಿಲ್ಲ’ ಎಂದರು.