ಹೋಟೆಲ್ನಲ್ಲಿ ಅಸ್ಥಿಪಂಜರ ಇರಿಸಿರುವುದರ ಹಿಂದೆ ಒಂದು ಉದ್ದೇಶವಿದೆ. ಕಾಫಿ ಸೇವನೆಗೆ ಬಂದವರಲ್ಲಿ ‘ಸಾವಿನ ನಂತರ ಏನು’ ಎಂಬ ಪ್ರಶ್ನೆ ಮೂಡಬೇಕು. ಜೀವನದ ಮೌಲ್ಯ, ಮಹತ್ವದ ಬಗ್ಗೆ ಅರಿತುಕೊಳ್ಳಲು ಅಸ್ಥಿಪಂಜರ ಪ್ರೇರಣೆ ಒದಗಿಸುತ್ತದೆ ಎನ್ನುವುದು ಕೆಫೆ ಮಾಲೀಕರ ನಿರೀಕ್ಷೆ. ಈ ಮೂಲಕ ಬೌದ್ಧಧರ್ಮದ ಮಹತ್ವದ ಬಗ್ಗೆ ಅರಿವು ಮೂಡಿಸಬಹುದು ಎಂದು ಮಾಲೀಕರು ನಂಬಿದ್ದಾರೆ. ಕೆಫೆಯಲ್ಲಿ ಕಪ್ಪು ಮತ್ತು ಬಿಳಿ ಬಣ್ಣಗಳೇ ಪ್ರಧಾನವಾಗಿವೆ. ಶವದ ಪೆಟ್ಟಿಗೆಯನ್ನೂ ಇರಿಸಲಾಗಿದೆ. ಆಸೆ ಇರುವವರು ಅದರಲ್ಲಿ ಮಲಗಿ ಅನುಭವ ಪಡೆದುಕೊಳ್ಳಬಹುದು. ಕೆಫೆಯಲ್ಲಿರುವ ಪಾನೀಯಗಳಿಗೆ ಸಾವು, ನೋವು, ರೋಗ ಎಂಬ ಹೆಸರುಗಳನ್ನು ಇಡಲಾಗಿದೆ.