ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪನ್ಯಾಸಕ ಹುದ್ದೆಯ ಅಭ್ಯರ್ಥಿ ಪಿ.ಅರ್ಜುನ್, ‘2014–15ನೇ ಸಾಲಿನಲ್ಲಿ ನಡೆದ ಪದವಿ ಪೂರ್ವ ಉಪನ್ಯಾಸಕರ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿ ಮೂರು ಬಾರಿ ಕೀ ಉತ್ತರಗಳನ್ನು ಪ್ರಕಟಿಸಿದ ಮೇಲೂ ತಪ್ಪುಗಳು ಉಳಿದಿದ್ದವು.ಈ ಬಗ್ಗೆ ಸ್ವತಃ ಸಾಹಿತಿಗಳು, ಶಿಕ್ಷಣ ತಜ್ಞರೇಆಕ್ಷೇಪ ವ್ಯಕ್ತಪಡಿಸಿದ್ದಾರೆ, ಅದಕ್ಕಾಗಿಯೇ ಹರೀಶ್ ಗೌಡರಿಂದ ತನಿಖೆ ನಡೆಸಲಾಗಿದೆ. ಆದರೆ ತನಿಖೆಯಲ್ಲಿ ಕಂಡ ಅಂಶಗಳು ಏನು, ಅದನ್ನು ಅನುಷ್ಠಾನಕ್ಕೆ ತರಲಾಗಿದೆಯೇ ಎಂಬುದನ್ನು ಸಾರ್ವಜನಿಕರಿಗೆ ತಿಳಿಸದೆ ಮರೆ ಮಾಚಲಾಗಿದೆ’ ಎಂದರು.