‘ಹಿಂದೆ ಈ ಚುನಾವಣೆಯನ್ನು ಹಳೆಯ ಮತದಾರರ ಪಟ್ಟಿ ಬಳಸಿ ನಡೆಸಲಾಗಿದೆ. ಆದರೆ, ಇನ್ಮುಂದೆ ಪದವೀಧರರ ಕ್ಷೇತ್ರದ ಪ್ರತಿ ಚುನಾವಣೆಯಲ್ಲೂ ಹೊಸದಾಗಿ ಮತದಾರರ ಪಟ್ಟಿ ಸಿದ್ಧಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಹೀಗಾಗಿ, ಮತದಾರರು ನಮೂನೆ–18ನ್ನು ಸಲ್ಲಿಸಿ ಹೆಸರು ನೋಂದಾಯಿಸಬೇಕು. ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಪದವೀಧರರು ಮತದಾರರಾಗಲು ಅರ್ಹರಿದ್ದಾರೆ. 2016ರ ನ.1ರ ಒಳಗೆ ಪದವಿ ಪಡೆದಿರಬೇಕು’ ಎಂದು ತಿಳಿಸಿದರು.