ಪಾರದರ್ಶಕತೆ ಅಗತ್ಯ:‘ಸ್ಪರ್ಧಾತ್ಮಕ ಪರೀಕ್ಷೆ, ಬಳಿಕ ಉದ್ಯೋಗ ಪಡೆಯುವುದು ಎಂದರೆ ಅದು ವ್ಯಕ್ತಿಯ ಭವಿಷ್ಯದ ಪ್ರಶ್ನೆ. ಯಾರಿಗೂ ತೊಂದರೆ ಆಗಬಾರದು. ಕೆಇಎ ಸಮರ್ಪಕವಾಗಿ ಪರೀಕ್ಷೆ ನಡೆಸುವ ಪರಿಪಾಠ ಇಟ್ಟುಕೊಂಡಿದ್ದು, ಪಿಯು ಉಪನ್ಯಾಸಕರ ನೇಮಕಾತಿಯಲ್ಲಿ ಅಪಸ್ವರ ಕೇಳಿಬಂದಿದ್ದಕ್ಕೆ ಬೇಸರವಾಯಿತು. ಯಾರಲ್ಲೂ ಗೊಂದಲ ಇರಬಾರದು ಎಂಬ ಕಾರಣಕ್ಕೆ ಈ ಸಭೆ ಕರೆಯಲಾಗಿದೆ. ನೇಮಕಾತಿಯಲ್ಲಿ ಯಾವುದೇ ತಪ್ಪು ಆಗಿಲ್ಲ ಎಂದಾದರೆ ಫಲಿತಾಂಶ ಪ್ರಕಟಿಸುವುದಕ್ಕೆ ನನ್ನ ಅಭ್ಯಂತರ ಇಲ್ಲ’ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.