ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮ ಯೋಧ ಗುರು ಪಾರ್ಥಿವ ಶರೀರಕ್ಕೆ ಪತ್ನಿ ಕಲಾವತಿ ಸೆಲ್ಯೂಟ್‌

Last Updated 14 ಫೆಬ್ರುವರಿ 2020, 2:44 IST
ಅಕ್ಷರ ಗಾತ್ರ

ಮಂಡ್ಯ: ಹುತಾತ್ಮ ಯೋಧನ ಪಾರ್ಥಿವ ಶರೀರ ಹುಟ್ಟೂರಿಗೆ ತಲುಪುತ್ತಿದ್ದಂತೆಮಡುಗಟ್ಟಿದ್ದ ದುಃಖದ ಕೋಡಿ ಹೊಡೆಯಿತು.ಗುರು ಅವರನ್ನು ಕೊನೆಯ ಸಲ ಕಣ್ತುಂಬಿಕೊಳ್ಳಲು ಬಂದಿದ್ದ ಸಾವಿರಾರು ಜನರು ಕಂಬನಿ ಮಿಡಿದರು.

ಕುಟುಂಬ ಸದಸ್ಯರು, ಸಂಬಂಧಿಕರು ಸೇರಿದಂತೆ ನೆರೆದಿದ್ದ ಸಾವಿರಾರು ಜನರು ಯೋಧನ ಅಂತಿಮ ದರ್ಶನ ಪಡೆದರು.ಹುತಾತ್ಮ ಯೋಧನ ಪತ್ನಿ ಕಲಾವತಿಪಾರ್ಥಿವ ಶರೀರದೆದುರು ನಿಂತು ಸೆಲ್ಯೂಟ್‌ ಹೊಡೆದು ಗೌರವ ಸಲ್ಲಿಸಿದಾಗಆಕ್ರಂದನ ಮುಗಿಲು ಮುಟ್ಟಿತು.

ಯೋಧನ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಭಾರತೀನಗರ ಸಮೀಪದಮೆಳ್ಳಹಳ್ಳಿಯ ಹೆಬ್ಬಾಳ ಬಳಿಯಿರುವ10ಗುಂಟೆ ಸರ್ಕಾರಿ ಜಾಗದಲ್ಲಿಅಂತ್ಯ ಸಂಸ್ಕಾರನೆರವೇರಲಿದ್ದು, ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯಶರೀರವನ್ನು ಅಲ್ಲಿಗೆತರಲಾಗಿದೆ.

ನಿಧಿ ಸಂಗ್ರಹ:ವೀರ ಯೋಧನಕುಟುಂಬಕ್ಕೆ ನೆರವು ನೀಡುವ ಸಲುವಾಗಿತಾಲ್ಲೂಕು ಜೆಡಿಎಸ್ ಘಟಕದ ವತಿಯಿಂದ ಅಂತ್ಯ ಸಂಸ್ಕಾರದ ಸ್ಥಳದಲ್ಲೇ ಪರಿಹಾರ ನಿಧಿ ಸಂಗ್ರಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT