‘ಭಾರತದಲ್ಲಿ ಅಸಮಾನತೆಗೂ ಹಲವಾರು ಆಯಾಮಗಳಿವೆ. ಪ್ರಜಾಪ್ರಭುತ್ವದ ಉಳಿವಿನಿಂದ ಮಾತ್ರ ಯಾವುದೇ ಅಸಮಾನತೆ ವಿರುದ್ಧ ಹೋರಾಡಲು ಸಾಧ್ಯ. ಆದರೆ, ಕೆಲ ವರ್ಷಗಳಲ್ಲಿ ಮಾಹಿತಿ ಹಕ್ಕು ಕಾಯಿದೆಯನ್ನೂ ಕ್ಷೀಣಗೊಳಿಸಿದ್ದು, ಮಾಧ್ಯಮ ಸೇರಿದಂತೆ ಪ್ರಜಾಪ್ರಭತ್ವದ ಸ್ವಾಯತ್ತ ಸಂಸ್ಥೆಗಳೇ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿವೆ’ ಎಂದು ಖೇದ ವ್ಯಕ್ತಪಡಿಸಿದರು.