‘ಸರ್ಕಾರ ಕೆಡವಲು ಬಿಜೆಪಿಯವರು ಯತ್ನ ಮುಂದುವರಿಸಿದರೆ, ಅದಕ್ಕೆ ಹೇಗೆ ಪ್ರತ್ಯುತ್ತರ ನೀಡಬೇಕು ಎನ್ನುವುದು ನಮಗೂ ಗೊತ್ತಿದೆ. ಬಿಜೆಪಿ ಷಡ್ಯಂತ್ರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು. ಅಪವಿತ್ರ ರಾಜಕಾರಣವಾದ ಆಪರೇಷನ್ ಕಮಲ ನಡೆಯಬಾರದು. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.