‘ಜಾಗಟಗಲ್ ಗ್ರಾಮದಲ್ಲಿ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಅಂಗಡಿ ಮತ್ತು ಹೋಟೆಲ್ಗಳು ವ್ಯಾಪಾರ ಮಾಡುತ್ತಿದ್ದು, ಇದು ‘ಪಂಚಾಯಿತಿ ಕಾಯ್ದೆ 1993’ ರ ವಿರುದ್ಧವಾಗಿದೆ. ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರು ಮೃತಪಟ್ಟ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ಅಂಗಡಿ, ಹೋಟೆಲ್ ಮುಚ್ಚಿದ್ದು, ಈ ನೋಟಿಸ್ ಮುಟ್ಟಿದ ತಕ್ಷಣ ವ್ಯಾಪಾರ ಆರಂಭಿಸಬೇಕು’ ಎಂದು ಸೂಚಿಸಿದ್ದರು.