ನೀರಿಲ್ಲದೆ ಬರಿದಾಗಿದ್ದ ನದಿಗೆ ಜೀವಕಳೆ ತುಂಬಿಕೊಂಡಿದ್ದು, ಆಗಸ್ಟ್ 14ರಿಂದ ರಾಯರ ಆರಾಧನಾ ಮಹೋತ್ಸವಕ್ಕೆ ಬರುವ ಭಕ್ತರು ತುಂಗಾದಲ್ಲಿ ಪುಣ್ಯಸ್ನಾನಕ್ಕೆ ಮಾಡಲು ಸಾಧ್ಯವಾಗಲಿದೆ.
ತುಂಗಭದ್ರಾ ನದಿ ನೀರು ಬರುತ್ತಿದ್ದಂತೆ ಮಂತ್ರಾಲಯ ಮಠದಲ್ಲಿ ಸಂಭ್ರಮ ಮನೆಮಾಡಿದೆ. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ನದಿತೀರಕ್ಕೆ ತೆರಳಿ, ಪೂಜೆ ಸಲ್ಲಿಸಿದರು.