ಎರಡು ವರ್ಷಗಳ ನಂತರ ಚಿತ್ರದುರ್ಗದ ಗೋಪಾಲಸ್ವಾಮಿ, ಸಿಹಿನೀರು ಹೊಂಡಗಳು ಕೋಡಿ ಬಿದ್ದಿವೆ. ಹಿರಿಯೂರು ತಾಲ್ಲೂಕಿನ ಬಬ್ಬೂರು ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಸೂಗೂರು, ಇಕ್ಕನೂರು, ಈಶ್ವರಗೆರೆ ಭಾಗಗಳಲ್ಲೂ ಉತ್ತಮ ಮಳೆಯಾಗಿದೆ. ಮೊಳಕಾಲ್ಮುರು ಪಟ್ಟಣ ಸೇರಿ ತಾಲ್ಲೂಕಿನ ರಾಯಪುರ ಹಾಗೂ ಬಿ.ಜಿ. ಕೆರೆಯಲ್ಲಿ ಹದ ಮಳೆಯಾಗಿದೆ.