ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ದಸರಾ ಉದ್ಘಾಟನೆಗೆ ಮಳೆ ಅಡ್ಡಿ, 15 ನಿಮಿಷ ರಸ್ತೆಯಲ್ಲೇ ಸಿಲುಕಿದ ಸಿಎಂ

Last Updated 14 ಅಕ್ಟೋಬರ್ 2018, 15:35 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ದಸರಾ ಉದ್ಘಾಟನೆಗೆ ಭಾನುವಾರ ನಗರಕ್ಕೆ ಬಂದಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಭಾರಿ ಮಳೆ ಅಡ್ಡಿ ಉಂಟುಮಾಡಿದೆ.

ನಿಗದಿಯಂತೆ ಸಂಜೆ 6 ಗಂಟೆಗೆ ಕುದ್ರೋಳಿ ದೇವಸ್ಥಾನಕ್ಕೆ ಬಂದು ಈ ಬಾರಿಯ ಮಂಗಳೂರು ದಸರಾಕ್ಕೆ ವಿಧ್ಯುಕ್ತ ಚಾಲನೆ ನೀಡಬೇಕಿತ್ತು. ಆದರೆ ಸಂಜೆ 6.30ರ ವೇಳೆಗೆ ಅವರು ದೇವಸ್ಥಾನದತ್ತ ಬರುತ್ತಿದ್ದಂತೆಯೇ ಭಾರಿ ಮಳೆಯೂ ಆರಂಭವಾಯಿತು. ಇದರಿಂದಾಗಿ ಭಾರಿ ಸಂಚಾರ ದಟ್ಟಣೆ ಉಂಟಾಗಿ ಸುಮಾರು 15 ನಿಮಿಷ ಅವರು ರಸ್ತೆಯಲ್ಲೇ ಸಿಕ್ಕಿಹಾಕಿಕೊಳ್ಳುವಂತಾಯಿತು.

ಪೊಲೀಸ್ ಬೆಂಗಾವಲು ಇದ್ದರೂ ಮುಖ್ಯಮಂತ್ರಿ ತೆರಳುವುದಕ್ಕೇ ಮಳೆ ಅಡ್ಡಿಪಡಿಸುವ ಮೂಲಕ ಇಡೀ ಕಾರ್ಯಕ್ರಮ ಸುಮಾರು ಒಂದು ತಾಸು ವಿಳಂಬವಾಗಿದ್ದು, ಸೇರಿರುವ ಸಾವಿರಾರು ಮಂದಿ ಮುಖ್ಯಮಂತ್ರಿ ಅವರ ಬರುವಿಕೆಗಾಗಿ ಕಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT