ಬೆಂಗಳೂರು: ಟ್ರಫ್ (ಮೋಡಗಳ ಸಾಲು) ರಾಜ್ಯದ ಮೇಲೆಹಾದು ಹೋಗಿರುವ ಕಾರಣ ಇನ್ನೂ ಎರಡು ದಿನ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಆದರೆ, ನಿರಂತರವಾಗಿ ಮಳೆ ಸುರಿಯುವ ಸಾಧ್ಯತೆ ಇಲ್ಲ. ಗರಿಷ್ಠ ಎರಡು ಗಂಟೆ ಮಳೆ ಬೀಳಬಹುದು ಎಂದು ರಾಜ್ಯ ವಿಕೋಪ ನಿರ್ವಹಣಾ ಸಂಸ್ಥೆಯ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದರು.
ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆದಿದ್ದು, ಕಲಬುರ್ಗಿಯಲ್ಲಿ ಗುರುವಾರ ಗರಿಷ್ಠ 41 ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮುಂದಿನ 48 ಗಂಟೆಯೂ ಒಣ ಹವೆ ಮುಂದುವರೆಯಲಿದೆ ಎಂದರು.
Rainfall upto 11PM for #Bengaluru#Karnataka. Rains mostly in southern districts of the state!
Heavy rains in outskirts of #Bengaluru while core urban areas missed heavy rains.