ಬೆಳಕೊಯ್ಲಿಗೆ ತೊಂದರೆ: (ಚಿಕ್ಕಮಗಳೂರು): ಕಾಫಿನಾಡಿನ ಚಿಕ್ಕಮಗಳೂರು, ಕಡೂರು,ಕೊಪ್ಪ, ಮೂಡಿಗೆರೆ, ಗಿರಿಶ್ರೇಣಿ ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಶೀತಮಯವಾಗಿತ್ತು. ಮಳೆ ಕೃಷಿಕರಲ್ಲಿ ಆತಂಕ ಮೂಡಿಸಿದೆ. ಅಡಿಕೆ ಕೊಯ್ಲಿಗೆ ಅಡ್ಡಿಯಾಗಿದೆ. ಕಾಫಿ, ಕಾಳು ಮೆಣಸು, ಭತ್ತ, ಇತರ ಬೆಳೆಗಳಿಗೆ ತೊಡಕಾಗಿದೆ.