ನೆರೆಯ ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಇಳಿಮುಖವಾಗಿದೆ. ರಾಜಾಪುರ ಬ್ಯಾರೇಜ್ ಮೂಲಕ 74,900 ಕ್ಯುಸೆಕ್ ಹಾಗೂ ದೂಧ್ಗಂಗಾ– ವೇದಗಂಗಾ ಮೂಲಕ 17,424 ಕ್ಯುಸೆಕ್ ನೀರು ಸೇರಿ ಚಿಕ್ಕೋಡಿಯ ಕಲ್ಲೋಳ ಬಳಿ 92,324 ಕ್ಯುಸೆಕ್ ನೀರು ಕೃಷ್ಣಾಗೆ ಸೇರಿಕೊಳ್ಳುತ್ತಿದೆ. ಚಿಕ್ಕೋಡಿ ತಾಲ್ಲೂಕಿನಲ್ಲಿ ಜಲಾವೃತಗೊಂಡಿರುವ 6 ಸೇತುವೆಗಳು ಯಥಾಸ್ಥಿತಿಯಲ್ಲಿವೆ. ರಾಯಬಾಗದ ಕುಡಚಿ ಸೇತುವೆ ಹಾಗೂ ಚಿಂಚಲಿ ಹಾಲಹಳ್ಳದ ಸೇತುವೆ ಮೇಲಿನ ನೀರು ಇಳಿದಿದೆ. ಜನರ ಸಂಚಾರ ಆರಂಭಗೊಂಡಿದೆ.