ಚೆನ್ನೈನಿಂದ ಈ ವಿಮಾನವು ಬೆಳಿಗ್ಗೆ 8.10ಕ್ಕೆ ಮೈಸೂರಿಗೆ ಬರಬೇಕಿತ್ತು. ಆದರೆ, 9.30ರ ಸುಮಾರಿಗೆ ಬಂದಿಳಿಯಿತು. ವಿಮಾನದಲ್ಲಿ 42 ಮಂದಿ ಪ್ರಯಾಣಿಕರು ಇದ್ದರು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಹೇಳಿದರು. ರಜನಿಕಾಂತ್ ಅವರು ಬಂಡೀಪುರಕ್ಕೆ ತೆರಳಿದ್ದು, ಜ. 29ರವರೆಗೆ ಅಲ್ಲಿದ್ದು, ವಿಶ್ರಾಂತಿ ಪಡೆಯ ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.