ರಾಯಚೂರು: ಮಂತ್ರಾಲಯದಲ್ಲಿರುವ ‘ರಾಜಕುಮಾರ್ ಭವನ’ವು ನವೀಕರಣಗೊಂಡಿದ್ದು, ಶೀಘ್ರದಲ್ಲೇ ವಾಸ್ತವ್ಯಕ್ಕೆ ಲಭ್ಯವಾಗಿದೆ.
ಎಪ್ಪತ್ತರ ದಶಕದಲ್ಲಿ ಡಾ.ರಾಜಕುಮಾರ್ ಅವರು ತಮ್ಮದೇ ಹೆಸರಿನಲ್ಲಿ ಈ ಭವನವನ್ನು ನಿರ್ಮಿಸಿದ್ದರು. ಕಟ್ಟಡವು ಶಿಥಿಲಗೊಂಡಿತ್ತು. ರಾಜಕುಮಾರ್ ಅವರ ಪುತ್ರರು ಭವನವನ್ನು ನವೀಕರಿಸಿದ್ದಾರೆ.
ಗುರುವಾರ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಪುನೀತ್ ರಾಜಕುಮಾರ್ ಈ ವಿಷಯವನ್ನು ತಿಳಿಸಿದರು.
‘ನಟಸಾರ್ವಭೌಮ ಚಿತ್ರವು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ’ ಎಂದ ಅವರು, ‘ಐಟಿ ದಾಳಿ ಮುಗಿದು ಹೋಗಿರುವ ವಿಷಯ’ ಎಂದು ಹೇಳಿದರು.