ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಾಲಯ: ರಾಜಕುಮಾರ್‌ ಭವನ ನವೀಕರಣ

Last Updated 24 ಜನವರಿ 2019, 20:15 IST
ಅಕ್ಷರ ಗಾತ್ರ

ರಾಯಚೂರು: ಮಂತ್ರಾಲಯದಲ್ಲಿರುವ ‘ರಾಜಕುಮಾರ್‌ ಭವನ’ವು ನವೀಕರಣಗೊಂಡಿದ್ದು, ಶೀಘ್ರದಲ್ಲೇ ವಾಸ್ತವ್ಯಕ್ಕೆ ಲಭ್ಯವಾಗಿದೆ.

ಎಪ್ಪತ್ತರ ದಶಕದಲ್ಲಿ ಡಾ.ರಾಜಕುಮಾರ್‌ ಅವರು ತಮ್ಮದೇ ಹೆಸರಿನಲ್ಲಿ ಈ ಭವನವನ್ನು ನಿರ್ಮಿಸಿದ್ದರು. ಕಟ್ಟಡವು ಶಿಥಿಲಗೊಂಡಿತ್ತು. ರಾಜಕುಮಾರ್‌ ಅವರ ಪುತ್ರರು ಭವನವನ್ನು ನವೀಕರಿಸಿದ್ದಾರೆ.

ಗುರುವಾರ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಪುನೀತ್‌ ರಾಜಕುಮಾರ್‌ ಈ ವಿಷಯವನ್ನು ತಿಳಿಸಿದರು.

‘ನಟಸಾರ್ವಭೌಮ ಚಿತ್ರವು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ’ ಎಂದ ಅವರು, ‘ಐಟಿ ದಾಳಿ ಮುಗಿದು ಹೋಗಿರುವ ವಿಷಯ’ ಎಂದು ಹೇಳಿದರು.

ಫೆಬ್ರುವರಿಯಲ್ಲಿ ಸುಜಯೀಂದ್ರ ತೀರ್ಥರ ಜನ್ಮಶತಮಾನೋತ್ಸವ ಕಾರ್ಯಕ್ರಮವಿದ್ದು, ಭಾಗವಹಿಸುವಂತೆ ಪೀಠದ ಸ್ವಾಮಿಗಳು ಆಹ್ವಾನ ನೀಡಿರುವುದಾಗಿಯೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT