10 ಬಿಎಂಟಿಸಿ ಬಸ್ ಹಾಗೂ ನಾಲ್ಕು ಕೆ ಎಸ್ ಆರ್ ಪಿ ವಾಹನಗಳಲ್ಲಿ ಖೈದಿಗಳನ್ನು ಕರೆದೊಯ್ಯಲು ವ್ಯವಸ್ಥೆ ಮಾಡಲಾಯಿತು. ಪ್ರತಿ ಬಸ್ ಗೆ 18-20 ಮಂದಿಯನ್ನಷ್ಟೇ ಕೂರಿಸುವ ಮೂಲಕ ಅಂತರ ಕಾಯ್ದುಕೊಳ್ಳಲಾಯಿತು. 90ಕ್ಕೂ ಹೆಚ್ಚಿನ ಪೊಲೀಸರು ಭದ್ರತೆ ಒದಗಿಸಿದ್ದರು. ಇವರ ಸ್ಥಳಾಂತರಕ್ಕಾಗಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.