ಜೆ.ಸಿ.ಮಾಧುಸ್ವಾಮಿ ಅವರ ಹೇಳಿಕೆಗೆ, ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಅವರ ಜಟಾಪಟಿ ಮುಕ್ತಾಯವಾಗುತ್ತಿದ್ದಂತೆ, ‘ನಾನು ನಿಂತು ಗಲಾಟೆಯನ್ನು ನಿಲ್ಲಿಸಬಹುದಿತ್ತು. ಬೆಲ್ ಬಾರಿಸಬಹುದಿತ್ತು. ಗಲಾಟೆ ಮಾಡುವವರು ಸುಸ್ತಾಗಲಿ ಎಂಬ ಕಾರಣಕ್ಕೆ ಸುಮ್ಮನಿದ್ದೆ. ಇಲ್ಲಿ ಮಾಧ್ಯಮದವರು ಇದ್ದಾರೆ. ಅವರಿಗೆ ಆಹಾರವಾಗಬೇಕು ಎಂಬುದು ನಿಮ್ಮ ಆಸೆ’ ಎಂದು ಚುಚ್ಚಿದರು. ‘ಸಿದ್ದರಾಮಯ್ಯ ಬಂದ ಕೂಡಲೇ ಸಂಪುಟ ವಿಸ್ತರಣೆ ಮುಗಿಸಿ ಬಿಸಾಕಿ’ ಎಂದು ವ್ಯಂಗ್ಯವಾಗಿ ಹೇಳಿದರು.