ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅವರೊಬ್ಬ ಅಪ್ರಬುದ್ಧ ರಾಜಕಾರಣಿ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರು ನನ್ನ ಮನೆಗೆ ನೂರು ಬಾರಿ ಬಂದಿದ್ದಾರೆಯೇ ಹೊರತು, ನಾನು ಒಮ್ಮೆಯೂ ಅವರ ಮನೆಗೆ ಹೋಗಿಲ್ಲ. ಎಂದಿಗೂ ಬಿಜೆಪಿಯ ಕದ ತಟ್ಟಿಲ್ಲ. ಬಿಜೆಪಿಯವರೂ ನನ್ನನ್ನು ಸಂಪರ್ಕಿಸಿಲ್ಲ. ಮೈತ್ರಿ ಸರ್ಕಾರವಿದ್ದಾಗ ಅಸಮಾಧಾನ ಇದ್ದದ್ದು ನಿಜ. ಆದರೆ, ನಾನೆಂದೂ ಅವರಂತೆ ಬಹಿರಂಗವಾಗಿ ಹೇಳಿ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ಮಾಡಿಲ್ಲ’ ಎಂದು ತಿರುಗೇಟು ನೀಡಿದರು.