ಪಕ್ಷಿಗಳು ಗೂಡು ಕಟ್ಟುವ ತಾಣದಿಂದ ಸಾಕಷ್ಟು ದೂರವಿರುವ, ಪಾದಚಾರಿ ಮಾರ್ಗದಲ್ಲಿ, ಜನರ ವಿಶ್ರಾಂತಿ ಸ್ಥಳದಲ್ಲಿರುವ ಮರಗಳನ್ನು ಮಾತ್ರ ತೆಗೆಯಲಾಗುತ್ತಿದೆ. ಬಿದಿರು ತೆಗೆಯುವಾಗ ಪಕ್ಷಿಗಳು ಗೂಡು ಕಟ್ಟಿವೆಯೇ ಎಂದು ಪರಿಶೀಲಿಸಿ ಪಕ್ಷಿ ಸಂಕುಲಕ್ಕೆ ಅಪಾಯ ಇಲ್ಲ ಎಂಬುದನ್ನು ಖಾತರಿಪಡಿಸಿಕೊಂಡೇ ಕತ್ತರಿಸಲಾಗುತ್ತಿದೆ ಎಂದರು.