‘ಜಕ್ಕಸಂದ್ರ ಎಕ್ಸ್ಟೆನ್ಶನ್ನ ಎಂ.ಎಲ್. ರಾಕೇಶ್ (22), ಸೂರ್ಯ (22) ಹಾಗೂ ಎಂ. ಮಣಿಕಂಠ (21) ಬಂಧಿತರು. ಮೇ 12ರಂದು ನಡೆದಿರುವ ಘಟನೆ ಸಂಬಂಧ ಮೇ 17ರಂದು ಸಂತ್ರಸ್ತೆ ದೂರು ನೀಡಿದ್ದರು. ಅದಾಗಿ 24 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಲಾಗಿದ್ದು, ಸದ್ಯ ಅವರೆಲ್ಲ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಇಶಾ ಪಂತ್ ತಿಳಿಸಿದರು.