ತಿಥಿ ಅಂಗವಾಗಿ ಸಂಬಂಧಿಕರೆಲ್ಲರೂ ಮೈಸೂರಿಗೆ ಬಂದಿದ್ದರು. ಪತ್ನಿ ಸಮೇತ ಮೈಸೂರಿಗೆ ಬರುವುದಾಗಿ ಅಂಬರೀಷ್ ತಿಳಿಸಿದ್ದರು. ‘ಬೆಳಿಗ್ಗೆಯಿಂದಲೂ ಎಲ್ಲರೂ ಅಂಬರೀಷ್ ಬರುವಿಕೆಗಾಗಿ ಕಾಯುತ್ತಿದ್ದೆವು. ಆದರೆ, ಮಧ್ಯಾಹ್ನದ ವೇಳೆಗೆ ಅವರು ಬರುವುದಿಲ್ಲ ಎಂಬುದು ಗೊತ್ತಾಯಿತು. ಕಾರ್ಯ ಮುಗಿಸುವಂತೆ ತಿಳಿಸಿದ್ದರು. ಆಗ ಆರೋಗ್ಯ ಅಷ್ಟೊಂದು ಗಂಭೀರವಾಗಿರಲಿಲ್ಲ’ ಎಂದು ಅಂಬರೀಷ್ ಚಿಕ್ಕಪ್ಪನ ಮಗ ಅಮರ್ ಅವರ ಪತ್ನಿ ವಸಂತಾ ಹೇಳಿದರು.